ಶನಿವಾರ, ಸೆಪ್ಟೆಂಬರ್ 25, 2010

ಜ್ಘ್ಯಾನವೆಂದರೆ ಯಾವುದು?

ಕೆಲಸ ಮಾಡುವಾಗ, ರಾಮನ್ ಹಾಗು ನಾರಾಯಣ ಹರಟೆಹೊಡೆಯುತ್ತಿದ್ದರು.
ರಾಮನ್: ನಾರಾಯಣ್ ನಾನು ಕಳೆದ ೫ ತಿಂಗಳಿಂದ ರಾತ್ರಿ ತರಗತಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನಗೆ ಪರೀಕ್ಷೆಯಿದೆ.
ನಾರಾಯಣ: ಒಹ್! ಹೌದಾ!
ರಾಮನ್: ಉದಾಹರಣೆಗೆ, ನಿನಗೆ ಗ್ರಾಹಾಂಬೆಲ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಗ್ರಾಹಾಂಬೆಲ್ ದೂರವಾಣೆಯನ್ನು ೧೮೭೬ರಲ್ಲಿ ಕಂಡುಹಿಡಿದ ಅನ್ವೇಷಕ, ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿನ, ಮತ್ತೇ ಅದೇ ವಿಚಾರದ ಬಗ್ಗೆ ಅವರ ನಡುವೆ ಮಾತುಕತೆಯಾಯಿತು.
ರಾಮನ್: ನಿನಗೆ ಅಲೆಗ್ಸಾಂಡರ್ ಡುಮಾಸ್ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ದಿ ೩ ಮಸ್ಕಿಟೀಯರ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.


ಮಾರನೇ ದಿವಸ ಅದೇ ಚರ್ಚೆಯಾಯಿತು
ರಾಮನ್: ನಿನಗೆ ಜೀನ್ ಜಾಕಸ್ ರೋಸೈ ಯಾರೆಂದು ತಿಳಿದಿದೆಯೇ?
ನಾರಾಯಣ: ಗೊತ್ತಿಲ್ಲ.
ರಾಮನ್: ಅವನು ’ಕನ್‌ಪ್ಫೆಶನ್ಸ್" ಪುಸ್ತಕ ಬರೆದವನು,ನೀನು ರಾತ್ರಿ ತರಗತಿಗೆ ಬಂದರೆ ನಿನಗೂ ತಿಳಿಯುತ್ತದೆ.
ಈ ಬಾರಿ ನಾರಾಯಣ್ ಗೆ ತುಂಬಾ ಸಿಟ್ಟು ಬಂತು ಹಾಗು ಅವನು ರಾಮನ್ ಗೆ ಪ್ರಶ್ನೆ ಕೇಳಿದ: ನಿನಗೆ ಬಾಲಕೃಷ್ಣ ಕುಪ್ಪುಸ್ವಾಮಿ ಯಾರೆಂದು ತಿಳಿದಿದೆಯೇ?
ರಾಮನ್: ಗೊತ್ತಿಲ್ಲ.
ನಾರಾಯಣ್: ಅವನು ನಿನ್ನ ಹೆಂಡತಿಯೊಂದಿಗೆ ತಿರುಗುತ್ತಿರುವವನು, ನೀನು ರಾತ್ರಿ ತರಗತಿಗೆ ಹೋಗುವುದನ್ನು ನಿಲ್ಲಿಸಿದರೆ ನಿನಗೆ ಇದು ತಿಳಿಯುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ