ಶತ್ರುಗಳನ್ನು
ಗೆಲ್ಲಬಲ್ಲವನಾದ ರಾಮನು
ಧನುಸ್ಸನ್ನು ಹಿಡಿದು ಲಂಕಾಪಟ್ಟಣವನ್ನು
ನೋಡುತ್ತಾ ನಿಂತನು. ಎಲ್ಲಾ ಅತ್ಯುತ್ತಮ ವಾನರರು, ವಿಭೀಷಣ ಮತ್ತು ಸುಗ್ರೀವರೊಂದಿಗೆ ಘರ್ಜಿಸುವ ಶಬ್ದಗಳನ್ನು ಮಾಡುತ್ತಾ ಧೈರ್ಯಶಾಲಿ ಶತ್ರುವನ್ನು ನಾಶಮಾಡಲು ಮುಂದಾದನು. ರಾಮ, ಎಲ್ಲರ ಕಾರ್ಯಗಳಿಗೆ
ಮತ್ತು ಉತ್ಸಾಹಕ್ಕೆ ಸಂತೋಷಪಟ್ಟನು ಮತ್ತು
ಅವರನ್ನು ಆಶೀರ್ವದಿಸಿದನು.
ವಾನರರ
ಸೈನ್ಯವು ಅವರ ರಾಜನ ನೇತೃತ್ವದಲ್ಲಿ ಮತ್ತು ಪ್ರಕಾಶಮಾನವಾದ ನಕ್ಷತ್ರಗಳಿಂದ ಪ್ರಕಾಶಿಸಲ್ಪಟ್ಟ ಶರತ್ಕಾಲದಲ್ಲಿ ಹುಣ್ಣಿಮೆಯ ರಾತ್ರಿಯಂತೆ ಆಕರ್ಷಕವಾಗಿ ಕಾಣುತಿತ್ತು. ಭೂಮಿಯು ಅವರ ಶಕ್ತಿಯುತ ಪಾದಗಳ
ಕೆಳಗೆ ಒತ್ತಲ್ಪಟ್ಟಿತ್ತು , ಅವರ ವೇಗದ ಚಲನೆಯಿಂದ ಭಯದಿಂದ ಕಂಪಿಸುತ್ತಿತ್ತು. ಆಗ ಎಲ್ಲರೂ ಲಂಕಾದಲ್ಲಿ
ದೊಡ್ಡ ಶಬ್ದ ಹಾಗೂ ಗದ್ದಲವನ್ನು
ಕೇಳಿದರು, ಭೇರಿ-ನಗಾರಿಗಳ ಗದ್ದಲದ ಶಬ್ದದಿಂದ ಅವರ ಕೂದಲು ರೋಮಾಂಚನಗೊಂಡವು.
ಅಬ್ಬರದ ಸದ್ದುನ್ನು ಮೀರಿಸುವಂತೆ
ವಾನರ ನಾಯಕರು
ಅಬ್ಬರಿಸಿದರು. ರಾಕ್ಷಸರು ಮೋಡಗಳ ಗುಡುಗುವಿಕೆಯನ್ನು ಹೋಲುವ ಹುಚ್ಚುಚ್ಚಾಗಿ ಸಂತೋಷಗೊಂಡ ವಾನರರ ಘರ್ಜನೆಯನ್ನು ಕೇಳಿದರು.
ಬಹು
ಬಣ್ಣದ ಧ್ವಜಗಳು ಮತ್ತು ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟ ಲಂಕಾವನ್ನು ನೋಡುತ್ತಾ ರಾಮನು,
ಸೀತೆಯ ಬಗ್ಗೆ ಯೋಚಿಸಿದನು ಮತ್ತು ಅವನ ಹೃದಯವು ದುಃಖದಿಂದ
ತುಂಬಿತ್ತು. ಚಿಕ್ಕ ಜಿಂಕೆಯ ಕಣ್ಣುಗಳನ್ನು ಹೋಲುವ ಸೀತೆಯನ್ನು ಅಲ್ಲಿ ರಾವಣನು ಬಂಧಿಸಿಟ್ಟಿದ್ದನು, ಹೇಗೆಂದರೆ ರೋಹಿಣಿ
ನಕ್ಷತ್ರವು ಕೆಂಪು ಗ್ರಹವಾದ ಮಂಗಳದಿಂದ ಆವರಿಸಿದಂತೆ ರಾವಣನು ಹೆದರಿದ ಸೀತೆಯನ್ನು ಅಪಹರಿಸಿ ಬಂದಿಸಿದಂತೆ ತೋರುತ್ತಿತ್ತು. ಲಕ್ಷ್ಮಣನನ್ನು ನೋಡಿ, ಬೆಚ್ಚಗಿನ ಮತ್ತು ಆಳವಾದ ನಿಟ್ಟುಸಿರಿನೊಂದಿಗೆ, ರಾಮನು ಹೇಳಿದನು - ವಿಶ್ವಕರ್ಮನು ತನ್ನ ಕಲ್ಪನೆಯಿಂದ ಮತ್ತು
ಆಕಾಶವನ್ನೇ ಕೊರೆದು ಬೆಟ್ಟದ ತುದಿಯಲ್ಲಿ ನಿರ್ಮಿಸಿದ ಈ ಲಂಕಾವನ್ನು ನೋಡು.
ಲಂಕಾನಗರವು ಏಳು
ಅಂತಸ್ತಿನ ಕಟ್ಟಡಗಳೊಂದಿಗೆ ದಟ್ಟವಾಗಿ ನಿರ್ಮಿಸಲ್ಪಟ್ಟಿದೆ ಮತ್ತು ಬಿಳಿ ಮೋಡಗಳಿಂದ ಆವೃತವಾದ
ವಿಷ್ಣುವಿನ ನಿವಾಸದಂತೆ ಕಾಣುತ್ತಿದೆ.
ಚೈತ್ರಥ
(ಕುಬೇರನ ಉದ್ಯಾನ) ದೊಂದಿಗೆ ಸ್ಪರ್ಧಿಸುವ ಉದ್ಯಾನಗಳಿಂದ ಲಂಕೆಯು ಸುಂದರವಾಗಿ ಕಂಗೊಳಿಸುತ್ತಿತ್ತು, ಪಕ್ಷಿಗಳ ಹಾಡುಗಳು, ಹಣ್ಣುಗಳನ್ನು ಹೊಂದಿರುವ ಮರ
ಗಿಡಗಳು ಮತ್ತು
ಹೂವುಗಳು ಸೊಂಪಾಗಿ ಅರಳುತ್ತಿವೆ . ಮರದ ಕೊಂಬೆ ರೆಂಬೆಗಳಲ್ಲಿ
ಹೇರಳವಾಗಿರುವ ಕೋಗಿಲೆಗಳು, ಜೇನುನೊಣಗಳು ಮತ್ತು ಪಕ್ಷಿಗಳು ಸಂತೋಷದಿಂದ ಕುಳಿತಿವೆ ಸೌಮ್ಯವಾಗಿ
ಬೀಸುತ್ತಿರುವ ಗಾಳಿಯು
ಮಧುರಗಾನವನ್ನೇ ಸೃಷ್ಟಿಸಿ ವಾತಾವರಣದಲ್ಲಿ
ಸಂತೋಷ ಹಾಗೂ ಉತ್ಸುಕತೆಯನ್ನು ತೇಲಿಸುತ್ತಿದೆ.
ರಾಮನು
ಲಕ್ಷ್ಮಣನಿಗೆ ಹೇಳಿದನು-ಶತ್ರು ಸೈನ್ಯವನ್ನು ತಂಡಗಳಾಗಿ ವಿಂಗಡಿಸಲಾಗಿದೆ
ಮತ್ತು ಗ್ರಂಥಗಳಲ್ಲಿ ಕಂಡುಬರುವ ಕಾರ್ಯವಿಧಾನದ ಪ್ರಕಾರ ಶ್ರೇಣಿಯಲ್ಲಿ ಜೋಡಿಸಲಾಗಿದೆ. ಅಂಗದನು ಸೈನ್ಯದ ರಚನೆಯ ಕೇಂದ್ರದಲ್ಲಿ ನೀಲನೊಂದಿಗೆ ಸ್ಥಾನವನ್ನು ತೆಗೆದುಕೊಳ್ಳಲಿ. ಋಷಭನು ಬಲಭಾಗವನ್ನು ತೆಗೆದುಕೊಳ್ಳುತ್ತಾನೆ, ಗಂಧಮಾದನನು ಎಡಭಾಗವನ್ನು ತೆಗೆದುಕೊಳ್ಳುತ್ತಾನೆ. ನಾನು ನಿಮ್ಮೊಂದಿಗೆ ಸೈನ್ಯದ
ಮುಂಚೂಣಿಯಲ್ಲಿ ಎಚ್ಚರವಾಗಿ ನಿಲ್ಲುತ್ತೇನೆ. ಜಾಂಬವಂತ, ಸುಷೇಣ ಮತ್ತು ವೇಗದರ್ಶಿ ಸೇನೆಯ ಮಧ್ಯದಲ್ಲಿರಲಿ. ಸುಗ್ರೀವನು ತನ್ನ ವೈಭವ ಮತ್ತು
ಶೌರ್ಯದಿಂದ ಸೈನ್ಯದ ಹಿಂಭಾಗವನ್ನು ರಕ್ಷಿಸಲಿ.
ಅಸಂಖ್ಯಾತ
ವಿಭಾಗಗಳನ್ನು ಹೊಂದಿರುವ ವಾನರ
ಸೈನ್ಯವು ಹೀಗೆ ಕೌಶಲ್ಯದಿಂದ ರಚಿಸಲ್ಪಟ್ಟಿತು, ಅಗ್ರಗಣ್ಯ ವಾನರರ ನೇತೃತ್ವದಲ್ಲಿ ವಾನರರ ಸಮೂಹಗಳು
ಮೋಡಗಳ ಮರೆಯಲ್ಲಿರುವ ಸ್ವರ್ಗವನ್ನು
ಹೋಲುತ್ತಿತ್ತು.
ನಾಯಕತ್ವವು
ಕಾರ್ಯಸಾಧನೆಯಲ್ಲಿರುತ್ತದೆ
, ಸ್ಥಾನದಲ್ಲಲ್ಲ. ನಾಯಕನು ಮುಂಭಾಗದಲ್ಲಿ ನಿಂತು ಮುನ್ನಡೆಸುತ್ತಾನೆ
ಮತ್ತು ತಂಡದ ಪ್ರತಿಯೊಂದು ಮತ್ತು
ಸಣ್ಣ ಅಂಶವನ್ನು
ನೋಡಿಕೊಳ್ಳುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ. ಒಬ್ಬ ಒಳ್ಳೆಯ ನಾಯಕನು
ಸರಾಸರಿ ತಂಡವನ್ನು ಉತ್ತುಂಗಕ್ಕೆ ತಲುಪಲು ಪ್ರೇರೇಪಿಸುತ್ತಾನೆ, ಆದರೆ ಕೆಟ್ಟ ನಾಯಕನು
ಉತ್ತಮ ಉದ್ಯೋಗಿಗಳನ್ನು ತೆಗೆದುಕೊಳ್ಳಬಹುದು, ಅವರನ್ನು ನಾಶಪಡಿಸಬಹುದು, ಅವರು ಪಲಾಯನ ಮಾಡಲು
ಮತ್ತು ಉಳಿದಿರುವವರು ಎಲ್ಲಾ ಪ್ರೇರಣೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಾನೆ.
ನಾಯಕನ
ಅತ್ಯಂತ ಶಕ್ತಿಶಾಲಿ ಸಾಧನವೆಂದರೆ ನುಡಿದಂತೆ ನಡೆಯುವುದು ಮತ್ತು ವೈಯಕ್ತಿಕವಾಗಿ ತಾನೇ ಎಲ್ಲದಕ್ಕೂ
ಉದಾಹರಣೆಯಾಗುವುದು.
#ಜೀವನದ
ಆಟ
ಮೂಲ
ಆಂಗ್ಲಭಾಷೆ: ಸ್ವಪ್ನಿಲ್ ಗುಪ್ತ
ಕನ್ನಡಕ್ಕೆ:
ನಾಗೇಂದ್ರ ಕೆ ಎಸ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ