ಯುದ್ಧದಲ್ಲಿ ರಾಕ್ಷಸರನ್ನು ಹತ್ತಿಕ್ಕುವ ಬಯಕೆಯಿಂದ ವಾನರರು ಲಂಕಾವನ್ನು ತಲುಪಲು ದೈತ್ಯಾಕಾರದ ಮರಗಳು ಮತ್ತು ಪರ್ವತ ಶಿಖರಗಳನ್ನು ವಶಪಡಿಸಿಕೊಂಡರು. ಅವರು ತಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿದರು - ಇದು ಪರ್ವತಗಳ ಶಿಖರಗಳಾ? ಇಲ್ಲ, ನಮ್ಮ ಮುಷ್ಟಿಗಳ ಪಟ್ಟು! ನಾವು ಈ ಲಂಕಾವನ್ನು ತುಂಡುಗಳಾಗಿ ಒಡೆದೇ ತೀರುತ್ತೇವೆ.
ರಾಮನು
ಹೇಳಿದನು-“ಸುಗ್ರೀವ! ನಮ್ಮ ಪಡೆಗಳು ಸರಿಯಾಗಿ
ಸಿದ್ಧವಾಗಿವೆ, ಈ ಶುಕ (ದೂತ)ನನ್ನು ಬಿಡುಗಡೆಗೊಳಿಸಿ.”
ಭಯದಿಂದ ನಡುಗುತ್ತಿದ್ದ ಗಿಳಿಯನ್ನು ಬಿಡುಗಡೆಗೊಳಿಸಲಾಯಿತು ಮತ್ತು ಅದು ರಾವಣನನ್ನು ತಲುಪಿತು.
ಭಯದ
ನಗೆಯೊಂದಿಗೆ ರಾಕ್ಷಸರಾಜನು ಶುಕನನ್ನು ಕುಹುಕಿಸಿದನು— “ನಿನ್ನ ರೆಕ್ಕೆಗಳನ್ನು ಏಕೆ ಕಟ್ಟಿಹಾಕಲಾಗಿದೆ,
ಶುಕಾ? ಏಕೆ ಆ ಭಯ ನಿನ್ನ ಕಣ್ಣುಗಳಲ್ಲಿ ತುಳುಕುತ್ತಿದೆ?” ನಡುಗುತ್ತಾ ಶುಕನು ಉತ್ತರಿಸಿದನು- ಸಾಗರದ ಉತ್ತರ ತೀರದಲ್ಲಿ, ನಿಮ್ಮ ಸಂದೇಶವನ್ನು
ನಾನು ಅಪಾರ ಸ್ಪಷ್ಟತೆಯೊಂದಿಗೆ, ಅವರಿಗೆ ನೀಡಿದ ಸೂಚನೆಗಳಂತೆ ಮೃದು ಮತ್ತು ಸಮನ್ವಿತ ಧ್ವನಿಯಲ್ಲಿ
ವಿವರಿಸಿದೆ. ಆದರೂ, ನನ್ನ ಉಪಸ್ಥಿತಿ ಅವರಿಗೆ ಕೋಪವನ್ನೇ ಎಬ್ಬಿಸಿದಂತಾಯಿತು—ವಾನರರು ಕ್ರೋಧದಿಂದ
ನದಿಯಂತೆ ನನ್ನ ಮೇಲೆ ಧಾಳಿ ಮಾಡಿದರು. ಅವರು ತಮ್ಮ ಮುಷ್ಟಿಯಿಂದ ಹೊಡೆದು, ನನ್ನ ರೆಕ್ಕೆಗಳನ್ನು ಎಳೆದುಹಾಕಲು
ತೊಡಗಿದರು.
ಆ
ವಾನರರು ಈ ವಿಷಯದಲ್ಲಿ ಮಾತನಾಡಲು
ಅಥವಾ ಪ್ರಶ್ನಿಸಲು ಸಮರ್ಥರಲ್ಲ. ಅವರು ಸ್ವಭಾವತಃ ಕೋಪವಂತರು ಮತ್ತು
ಉಗ್ರರು. ವಿರಾಧ, ಕಬಂಧ ಮತ್ತು ಖರನ
ಸಂಹರಿಸಿದ ರಾಮನು
ಸುಗ್ರೀವನ ಜೊತೆಗೆ ಲಂಕಾಕ್ಕೆ ಬಂದಿದ್ದಾನೆ. ಸಮುದ್ರಕ್ಕೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿದ ಅವನು ಇಲ್ಲಿ
ಪ್ರಬಲವಾದ ಬಿಲ್ಲು ಬಾಣಗಳನ್ನು ಹಿಡಿದಿದ್ದಾನೆ. ಪರ್ವತಗಳು ಮತ್ತು ಮೋಡಗಳನ್ನು ಹೋಲುವ ಕರಡಿಗಳು ಮತ್ತು ವಾನರರ ಸಮೂಹಗಳ
ಸಾವಿರಾರು ವಿಭಾಗಗಳೂ ಅಲ್ಲಿವೆ. ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ.
ಅತಿ
ಶೀಘ್ರದಲ್ಲೇ ಅವರು ನಮ್ಮ ಕೋಟೆಗೆ
ಮುತ್ತಿಗೆ ಹಾಕುತ್ತಾರೆ. “ತಕ್ಷಣವೇ, ನೀವು ಆಯ್ಕೆ ಮಾಡಿಕೊಳ್ಳಿ ಮಹಾರಾಜ
—ಸೀತೆಯನ್ನು ಒಪ್ಪಿಸಿ ಶರಣಾಗಿ , ಅಥವಾ ರಾಮನೊಂದಿಗೆ ತ್ವರಿತವಾಗಿ ಯುದ್ಧವನ್ನು ಮಾಡಿ!."
ಶುಕನ
ಮಾತು ಮುಗಿಯುವಷ್ಟರಲ್ಲಿ, ರಾವಣನ ಕಣ್ಣುಗಳು ರಕ್ತದಂಥ ಕೆಂಪಾಗಿ ಉರಿಯತೊಡಗಿದವು. ತನ್ನ ನೋಟದಿಂದಲೇ
ಶುಕನನ್ನು ಸುಟ್ಟಬಿಡುವಂತೆ ನೋಡಿ, ಗರ್ಜಿಸಿದನು—ಅವನ ಕೋಪ ನಿಗೂಢವಾದ ಅನಾಹುತದ ಚಿಹ್ನೆಯಂತಿತ್ತು,
ಮತ್ತು ಹೇಳಿದನು- “ನಾನು ದೇವಲೋಕವೋ, ಗಂಧರ್ವಲೋಕವೋ
ಅಥವಾ ರಾಕ್ಷಸ ಸೇನೆಯವರೆದುರು ಯುದ್ಧವನ್ನೇ ನಡೆಸಬೇಕಾದ್ರೂ ಸಹ, ಸೀತೆಯನ್ನು ಹಿಂತಿರುಗಿಸುವ
ಪ್ರಶ್ನೆಯೇ ಇಲ್ಲ! ರಾಮನು? ಕೇವಲ ವಾನರರೊಂದಿಗೆ ಇರುವ
ಮನುಷ್ಯನು! ನಾನು ಅವನಂತವನಿಗೆ
ಹೆದರುವೆನೇನೋ?.”
ವಸಂತದಲ್ಲಿ
ಅರಳಿದ ಮರವನ್ನೇ ಆವರಿಸುವ ಕಪ್ಪು ಜೇನುನೊಣಗಳಂತೆ, ನನ್ನ ಬಾಣಗಳು ರಾಮನ ಮೇಲೇರಿ ಬೀಳುವುದು ತಡವಿಲ್ಲದೆ!.
ಬೆಂಕಿಯ ಜ್ವಾಲೆಯು ಆನೆಯನ್ನು ದಹಿಸುವಂತೆ , ನನ್ನ
ಬಿಲ್ಲಿನಿಂದ ಉರಿಯುವ ಬಾಣಗಳು ರಾಮನ ದೇಹವನ್ನು ಚುಚ್ಚಿ ರಕ್ತದ ಕೋಡಿ ಹರಿಸುವಂತೆ ಮಾಡುವುವು. ಸೂರ್ಯೋದಯದಲ್ಲಿ
ನಕ್ಷತ್ರಗಳ ತೇಜಸ್ಸು ಕಳೆಯುವಂತೆ, ನನ್ನ ಮಹಾಸೈನ್ಯವು ವಾನರ ಸೈನ್ಯದ ಸಮೂಹವನ್ನು ನಿಶ್ಚಿತವಾಗಿಯೇ
ನಾಶಮಾಡುತ್ತದೆ.
ನನ್ನ
ಆವೇಶ ಸಮುದ್ರದ ಅಲೆಗಳಂತೆ ಬಿರಿದು ಹರಿಯುತ್ತದೆ, ನನ್ನ ಶಕ್ತಿ ಮಾರುತದ ರೋಷದಂತೆ ಉದ್ರೇಕಗೊಳ್ಳುತ್ತದೆ.
ರಾಮನಿಗೆ ನನ್ನ ಶಕ್ತಿಯ ಅರಿವಿಲ್ಲ—ಹೀಗಿರುವಾಗ ರಾಮನು ಹೇಗೆ ನನ್ನನ್ನು ಯುಧ್ಧದ್ದಲ್ಲಿ
ಎದುರಿಸಲು ಸಾಧ್ಯ. ರಾಮನಿಗೆ ಕಾಣದಿರುವುದು ಏನೆಂದರೆ—ನನ್ನ ಬತ್ತಳಿಕೆಯಲ್ಲಿ ಇರುವ ಸಹಸ್ರಾರು ವಿಷಪೂರಿತ
ಸರ್ಪಗಳ ಬಾಣಗಳು!. ಹೀಗಾಗಿ ನನ್ನ ಬಗೆಗಿನ ಅಜ್ಞಾನವೇ
ರಾಮನಿಗೆ ನನ್ನ ಮೇಲೆ ಯುದ್ಧಮಾಡಲು ಪ್ರೇರೇಪಿಸುತ್ತಿದೆ.
ಸಹಸ್ರ
ಕಣ್ಣುಗಳ ಇಂದ್ರನೇ ಆಗಲಿ, ಸಮುದ್ರದಾಧಿಪತಿ ವರುಣನೇ
ಆಗಲಿ, ತನ್ನ ಬಾಣಗಳ ಜ್ವಾಲೆಯಿಂದ ಮೃತ್ಯುದೇವ ಯಮನೇ ಆಗಲಿ, ಅಥವಾ ಸಂಪತ್ತಿನ ಅಧಿಪತಿ ಕುಬೇರನು
ಸತ್ಸಮರದಲ್ಲಿ ಎದುರುಗೊಂಡರೂ ಸಹ—ಯುದ್ಧ ಭೂಮಿಯಲ್ಲಿ ನನ್ನ ಮೇಲೆ ದಾಳಿ ಮಾಡಿ
ಗೆಲ್ಲುವ ಸಾಮರ್ಥ್ಯ ಯಾರಿಗೂ ಇಲ್ಲ.
ಅತಿಯಾದ
ಆತ್ಮವಿಶ್ವಾಸವು ಕೆಲವೊಮ್ಮೆ ನೆಪ ಮಾತ್ರದಲ್ಲಿ ಗೆಲುವು ತರಬಹುದು, ಆದರೆ ಇದು ಖಂಡಿತವಾಗಿಯೂ ಮುಂದೊಂದು
ದಿನ ನಮ್ಮ ವಿನಾಶಕ್ಕೆ ದಾರಿಮಾಡಿಕೊಡುತ್ತದೆ. ಇತರರ ಕುರಿತು ತೀರ್ಮಾನಿಸುವಾಗ ಅಥವಾ ಸ್ವಂತ ಸಾಮರ್ಥ್ಯಗಳ
ಬಗ್ಗೆಯೂ ನಾವು ಎಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸದಿಂದಿರಬಹುದು, ಆದರೆ ಎರಡರಲ್ಲಿಯೂ ವಾಸ್ತವಿಕ
ಮೌಲ್ಯಮಾಪನವೇ ನಿಜವಾದ ತಿಳಿವಳಿಕೆ.
ಹಿಂದಿನದನ್ನು
ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ ಎಂಬ ಭ್ರಮೆ, ಭವಿಷ್ಯವನ್ನು ಊಹಿಸುವ ನಮ್ಮ ಸಾಮರ್ಥ್ಯದಲ್ಲಿ
ಅತಿಯಾದ ಆತ್ಮವಿಶ್ವಾಸವನ್ನು ಬಿತ್ತುತ್ತದೆ. ಆದರೆ ಇತಿಹಾಸದ ಅರಿವಿಲ್ಲದೆ ಭವಿಷ್ಯದ ದಿಕ್ಕು ನಮಗೆ
ತಿಳಿಯದು.
#ಜೀವನದ
ಆಟ
ಮೂಲ ಆಂಗ್ಲಭಾಷೆ: ಸ್ವಪ್ನಿಲ್ ಗುಪ್ತ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ