ಮಂಗಳವಾರ, ನವೆಂಬರ್ 12, 2013

ಖಾಸಗಿಗೆ ಕತ್ತರಿ.

ಖಾಸಗಿಗೆ ಕತ್ತರಿ.

ಖಾಸಗಿ ಪಡಿತರ ಸಂಸ್ಥೆಗಳಿಗೆ ಕತ್ತರಿ
ಖಾಸಗಿಯವರಿಂದ ನಡೆಯುತ್ತಿತ್ತು ವಿತರಣೆ
ಈಗ ಸರ್ಕಾರಿ ಪಡಿತರ ಸಂಸ್ಥೆಗಳಷ್ಟೇ ಸರಿಸಾಟಿ
ಅವರು ವಿತರಿಸಿದರೆ ಸರಿ,ಇಲ್ಲದಿದ್ದರೂ ಸರಿ
ಏಕೆಂದರೆ ಸರ್ಕಾರಿ ಕೆಲಸ ದೇವರ ಕೆಲಸ
ಮಾಡಿದರೂ ಸೈ,ಮಾಡದ್ದಿದ್ದರೂ ಸೈ.

೨. ಮಕ್ಕಳಭಾಗ್ಯ ಯೋಜನೆ

ಸಿದ್ಧರಾಮಣ್ಣ ಹೇಗಾದರೂ ಆಗಲಿ
ಮುಸ್ಲೀಮರಿಗೆ ಕರುಣಿಸಿದ್ದಾರೆ ಶಾದಿ ಭಾಗ್ಯ
ಮುಂದೆ ಇನ್ನೂ ಏನೇನು ಭಾಗ್ಯಗಳು ಕಾದಿದೆಯೋ?
ಶಾದಿ ಆದ ಮೇಲೆ ಮಕ್ಕಳಾಗದವರಿಗೆ
ಸದ್ಯ ಸಚಿವರಿಂದ ಮಕ್ಕಳ ಭಾಗ್ಯಯೋಜನೆಗೆ
ಕೈಹಾಕದಿದ್ದರೆ ಸಾಕು;
ಏಕೆಂದರೆ ಈಗಾಗಲೇ ತಿವಾರಿಯಂತವರು
ಯೋಜನೆಯನ್ನು ಅನಧೀಕೃತವಾಗಿ ಜಾರಿಗೊಳಿಸಿದ್ದಾರೆ

೩. ಟಿಪ್ಪುಗೆ ರಂಗನಾಥನ ದರ್ಶನ

ದೇವೆಗೌಡರ ಹೇಳಿಕೆ
ಪಾಪ ಗೌಡರು ಕನಸು ಕಂಡಿರಬೇಕು
ಗೌಡರೆ ಎಚ್ಚರಿಕೆ ಸಿದ್ಧು
ಮೌಢ್ಯ ಅಂತ ಒಳಗಾಕ್ಸಿದರೆ ಕಷ್ಟ.

೪. ವಿಜಯ ಬ್ಯಾಂಕಿಗೆ  ರೂ ೧೩೬ ಕೋಟಿ ಲಾಭ

ಎಷ್ಟಾದರೂ ಜನರಿಂದ ವಸೂಲು ಮಾಡಿರೋದೆ ತಾನೆ
ಗ್ರಾಹಕರಿಗೆ ನಾಯಪೈಸೆ ಲಾಭವಿಲ್ಲ.
ಗ್ರಾಹಕರ ಜೇಬಿಗೆ ಯಾವಾಗಲೂ ಕತ್ತರಿ
ಬ್ಯಾಂಕಿಗೆ ಪ್ರತಿವರ್ಷವೂ ಲಾಭವೋ ಲಾಭ.

ದಿನಾಂಕ: ೧೨.೧೧.೨೦೧೩ ಕನ್ನಡಪ್ರಭದಿಂದ ಪ್ರೇರಿತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ