ಸೋಮವಾರ, ನವೆಂಬರ್ 11, 2013

ಸತ್ಯದ ಹೊಳಹು

ಒಂದು ಘಟನೆ ಎಷ್ಟೊಂದು ಸತ್ಯಗಳ ಹೊರಗೆಡವುತ್ತೆ ಅಂದರೆ ನಂಬೋದಕ್ಕೆ ಸಾಧ್ಯವಿಲ್ಲ ಆದರೂ ಅದು ಸತ್ಯ. ಎಷ್ಟೊಂದು ಜನರ ಮುಖವಾಡಗಳು ಕಳಚಿ ನಿಜಮುಖಗಳ ಸಾಕ್ಷಾತ್ಕಾರ ಅಥವಾ ದರ್ಶನವಾಗುವುದಂತೂ ನಿಜ.ಅವರವರ ಕಪಟ ಬಣ್ಣ ಕರಗಿ ನೈಜತೆಯ ಹೊರಹಾಕೋ ನಿಜ ಪ್ರಾಯೋಗಿಕ ಪರೀಕ್ಷೆಯೇ ಈ ಘಟನೆಗಳೆಂದರೆ ತಪ್ಪಿಲ್ಲ. ಜೀವನ ಪಾಠಶಾಲೆ ಎಂದು ಹಿರಿಯರು ಅಂದದ್ದು ಅದಕ್ಕೇ ಇರಬೇಕು.ಗೀತೆಯ ಸಾರದಂತೆ ಆದದ್ದಕ್ಕೆ ನಾನು ಕಾರಣನಲ್ಲ. ಆಗುವುದಕ್ಕೂ ನಾನು ಕಾರಣನಲ್ಲ ಬರಿ ನಿಮಿತ್ತಮಾತ್ರ ವೆಂಬುವುದೂ ಅಷ್ಟೇ ಸತ್ಯ.ನಮ್ಮ ಮನದ ಪರಿಪಕ್ವತೆಗೆ ಅಂತಹ ಘಟನೆಗಳು ಪೂರಕವೆಂದು ನಾವು ಅರಿತುಕೊಳ್ಳಬೇಕು. ನೊಂದುಕೊಂಡರೆ ಪ್ರಯೋಜನವಿಲ್ಲ. ಜೊತೆಯಲ್ಲಿರುವ ಅನೇಕ ಗೆಳೆಯರು ಘಟನೆಯ ಫಲವಾಗಿ ಕ್ಷಣಮಾತ್ರದಲ್ಲೇ ಶತೃಗಳಾಗುತ್ತಾರೆ ಹಾಗು ನಮ್ಮ ಮೇಲೆ ಕತ್ತಿ ಮಸೆಯಲು ಆರಂಭಿಸುತ್ತಾರೆ. ಹಾಗೆ ನಿಜಗೆಳೆಯರು ನಡುವೆಯಿದ್ದು ಗೋಡೆಯಂತೆ ಗೆಳೆತನವನ್ನು ಕಾಯುತ್ತಾರೆ. ಒಂದೇ ಘಟನೆ ಎರಡು ನೈಜತೆಯನ್ನು ಹೊರಹಾಕುತ್ತದೆ. ಎಷ್ಟೊಂದು ಸೋಜಿಗ. ಮನದ ಈ ರೀತಿಯ ಪರಿವರ್ತನೆ ನಂಬಲು ಕಷ್ಟಸಾಧ್ಯ.
ಇದೇ ಅಲ್ಲವೆ ವೇದಾಂತ ಅಥವಾ ಜೀವನ ಸತ್ಯ?.
ಕನ್ನಡಪ್ರಭ ದ "ಸುಪ್ರಭತಾ"ದ ಈ ನುಡಿ ಮನಮುಟ್ಟುವ ಹಾಗಿದೆ.

ಪ್ರತಿ ಸೋಲೂ ಒಂದು ಪಾಠ.
ಚೆನ್ನಾಗಿ ಕಲಿಯಬೇಕು.
ಪ್ರತಿ ಯಶಸ್ಸೂ ಒಂದು ಕನ್ನಡಿ.
ಜೋಪಾನವಾಗಿ ಕಾಪಾಡಬೇಕು.
ಪ್ರತಿ ಉತ್ತಮ ಗೆಳೆಯನೂ ವಜ್ರವಿದ್ದಂತೆ.
ಸರಿಯಾಗಿ ಕಾಪಾಡಿಕೊಳ್ಳಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ